ನೆಲ್ಯಾಡಿ: ’ಪ್ರಕೃತಿ’ಸ್ವಸಹಾಯ ಸಂಘ ಉದ್ಘಾಟನೆ

0

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾಲೂಕು ಇದರ ನೆಲ್ಯಾಡಿ ವಲಯದ ಮಾದೇರಿ ಕಾರ್ಯಕ್ಷೇತ್ರದಲ್ಲಿ ’ಪ್ರಕೃತಿ’ ಎಂಬ ನೂತನ ಸ್ವಸಹಾಯ ಸಂಘವನ್ನು ಮಾದೇರಿ ಹರಿಪ್ರಸಾದ್‌ರವರ ಮನೆಯಲ್ಲಿ ಉದ್ಘಾಟಿಸಲಾಯಿತು.


ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು ಉದ್ಘಾಟಿಸಿ ಶುಭಹಾರೈಸಿದರು. ಒಕ್ಕೂಟದ ಅಧ್ಯಕ್ಷ ಸೆಬಾಸ್ಟಿಯನ್ ಪಿ.ಜೆ.ಯವರು ಅಧ್ಯಕ್ಷತೆ ವಹಿಸಿದ್ದರು. ನೆಲ್ಯಾಡಿ ವಲಯದ ಮೇಲ್ವಿಚಾರಕ ವಿಜೇಶ್ ಜೈನ್‌ರವರು ತಂಡದ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಪ್ರಕೃತಿ ತಂಡದ ಪ್ರಬಂಧಕರಾಗಿ ಲಾಲಿ, ಸಂಯೋಜಕರಾಗಿ ರೋಸಮ್ಮ, ಕೋಶಾಧಿಕಾರಿ ಮಿನಿ, ಸದಸ್ಯರಾದ ಪ್ರೀತಿಕಾ, ರೇವತಿ, ಲಕ್ಷ್ಮೀ, ಸುನಿತಾ, ಹರಿಣಾಕ್ಷಿ, ಸೀತಾಲಕ್ಷ್ಮಿ, ಅಶ್ವಿನಿ, ಶೈನಿ, ಒಕ್ಕೂಟದ ಪದಾಧಿಕಾರಿಗಳಾದ ಕಮಲಾಕ್ಷ ಗೌಡ, ಲಕ್ಷ್ಮಣ ಗೌಡ, ಪ್ರಿಯಾ, ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು. ಕೌಕ್ರಾಡಿ ಒಕ್ಕೂಟದ ಸೇವಾ ಪ್ರತಿನಿಧಿ ನಮಿತಾ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮಾದೇರಿ ಒಕ್ಕೂಟದ ಸೇವಾಪ್ರತಿನಿಧಿ ಅನುಷಾ ವಂದಿಸಿದರು.

LEAVE A REPLY

Please enter your comment!
Please enter your name here