ಸೆ. 30ರಂದು ನೆಲ್ಯಾಡಿಯಲ್ಲಿ ಬೆಳ್ತಂಗಡಿ ಸಿರಿಯಾನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಶಾಖೆ ಉದ್ಘಾಟನೆ

0

ನೆಲ್ಯಾಡಿ : ಬೆಳ್ತಂಗಡಿ ಬಸ್ ನಿಲ್ದಾಣದ ಎದುರಿನ ಸಾಂತೋಮ್ ಟವರ್‌ನ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಿರಿಯಾನ್ ಕ್ಯಾಥೋಲಿಕ್ ವಿವಿಧೋzಶ ಸಹಕಾರ ಸಂಘದ ನೆಲ್ಯಾಡಿ ಶಾಖೆ ಸೆ.30ರಂದು ನೆಲ್ಯಾಡಿ ತೋಮ್ಸನ್ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಳ್ಳಲಿದೆ.ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಆಶೀರ್ವಚನ ನೀಡಲಿದ್ದಾರೆ.


ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಬಾಣಜಾಲು ಉದ್ಘಾಟಿಸುವರು. ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಎ.ಜೆ.ಅಧ್ಯಕ್ಷತೆ ವಹಿಸುವರು. ಗಣಕ ಯಂತ್ರದ ಉದ್ಘಾಟನೆಯನ್ನು ನೆಲ್ಯಾಡಿ ಸೈಂಟ್ ಅಲ್ಫೊನ್ಸಾ ಚರ್ಚ್ ಧರ್ಮಗುರು ರೆ.ಫಾ. ಶಾಜಿ ಮ್ಯಾಥ್ಯು ವೆಟ್ಟಂತಡತ್ತಿಲ್ ನೆರವೇರಿಸುವರು. ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಮ್ ಚಿಲಾಲ್ ಭದ್ರತಾ ಕೋಶದ ಉದ್ಘಾಟನೆ, ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘ ಉಪಾಧ್ಯಕ್ಷ ಜಾರ್ಜ್ ಎಮ್.ವಿ. ನಿರಖು ಠೇವಣಿ ಸರ್ಟಿಫಿಕೇಟ್ ವಿತರಿಸಲಿದ್ದು, ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕ ಸೆಬಾಸ್ಟಿನ್ ವಿ .ಟಿ. ಷೇರು ಸರ್ಟಿಫಿಕೇಟ್ ವಿತರಣೆ, ಕುಟ್ರುಪ್ಪಾಡಿ ಸೈಂಟ್ ಮೇರೀಸ್ ಫೊರೋನಾ ಚರ್ಚ್ ಧರ್ಮಗುರು ರೆ.ಫಾ. ವರ್ಗೀಸ್ ಪುದಿಯಡತ್ ಉಳಿತಾಯ ಖಾತೆ ಪುಸ್ತಕ ವಿತರಣೆ ಮಾಡುವರು. ಉದನೆ ಸೈಂಟ್ ತೋಮಸ್ ಫರೋನಾ ಚರ್ಚ್ ಧರ್ಮಗುರು ರೆ.ಫಾ. ತೋಮಸ್ ಪನಚಿಕ್ಕಲ್ ಉದನೆ, ಶಿರಾಡಿ ಸೈಂಟ್ ಸೆಬಾಸ್ಟಿನ್ ಚರ್ಚ್ ಧರ್ಮಗುರು ರೆ.ಫಾ. ಜೋಸೆಫ್ ಪೂರಕುಯಿಲ್, ಅಡ್ಡಹೊಳೆ ಸೈಂಟ್ ತೋಮಸ್ ಚರ್ಚ್ ಧರ್ಮಗುರು ರೆ.ಫಾ. ಜೋಸೆಫ್ ಪಾಂಬಕ್ಕೆಲ್, ಕಳೆಂಜ ಸೈಂಟ್ ಸೆಬಾಸ್ಟಿನ್ ಚರ್ಚ್ ಧರ್ಮಗುರು ರೆ.ಫಾ. ಜೋಸೆಫ್ ವಾಳುಕ್ಕಾರನ್ ಗೌರವ ಉಪಸ್ಥಿತರಿರುವರು.
ನಿರ್ದೇಶಕರಾದ ಅಂದಾನಿ, ಜೈಸನ್, ಬಾಬು ತೋಮಸ್, ಬಿಜು, ಸೋಫಿ, ಫಿಲೋಮಿನಾ, ನಾಮ ನಿರ್ದೇಶಕರಾದ ಬಿಜು ಎಂ. ಜೆ. ಸೆಬಾಸ್ಟಿಯನ್ ಮುಖ್ಯ ಕಾರ್ಯನಿರ್ವಾಹಣಧಿಕಾರಿ ಮನೋಜ್ ಪಿ. ಎ. ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here