![](https://puttur.suddinews.com/wp-content/uploads/2024/02/e5fde1ee-9d1a-4d76-9941-86899ddc47e5.jpg)
ಪುತ್ತೂರು: ಪುತ್ತೂರು, ಪುತ್ತೂರ್ದ ಮುತ್ತು, ವಿಟ್ಲ, ಮಾಣಿ, ಕಾವು, ಪಾಣಾಜೆ, ಆಲಂಕಾರು ದುರ್ಗಾಂಬ ಲಯನ್ಸ್ ಕ್ಲಬ್ ಗಳನ್ಬು ಒಳಗೊಂಡ ಲಯನ್ಸ್ ಕ್ಲಬ್ 6ನೇ ಪ್ರಾಂತಿಯ ಸಮ್ಮೇಳನವು ಮಾ.2ರಂದು ಪುತ್ತೂರು ಕೃಷ್ಣನಗರ ಬನ್ನೂರು ಚರ್ಚ್ ಮುಂಭಾಗದಲ್ಲಿರುವ ಒರಿಯಂಟಲ್ ಕ್ಯಾಶ್ಯುವ್ ಇಂಡಸ್ಟ್ರೀಸ್ ನಲ್ಲಿ ನಡೆಯಲಿದೆ ಎಂದು ಪ್ರಾಂತಿಯ ಸಮ್ಮೇಳನದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಕಾರ್ಯದರ್ಶಿ ಗಣೇಶ್ ಶೆಟ್ಟಿ, ವಲಯ 1ರ ಅಧ್ಯಕ್ಷೆ ವೆನ್ನಿ ಮಸ್ಕರೆನಸ್, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿಮಸ್ಕರೇನಸ್, ಪುತ್ತೂರು ದ ಮುತ್ತು ಕ್ಲಬ್ ಅಧ್ಯಕ್ಷ ರವೀಂದ್ರ ಪೈ ಉಪಸ್ಥಿತರಿದ್ದರು.