ಎ.12 : ಸುದ್ದಿ ಅರಿವು ಕೃಷಿ ಮಾಹಿತಿ ಕೇಂದ್ರದಿಂದ ಅಕ್ವೇರಿಯಂ ಮೀನು ಸಾಕಾಣಿಕೆ ತರಬೇತಿ ಕಾರ್ಯಾಗಾರ

0

ಪುತ್ತೂರು: ಸುದ್ದಿ ಕೃಷಿ ಮಾಹಿತಿ ಕೇಂದ್ರ “ಅರಿವು” ಇದರ ವತಿಯಿಂದ ಎ.12ರಂದು ಬೆಳಿಗ್ಗೆ 10.30ರಿಂದ 12.30ರವರೆಗೆ ಅಕ್ವೇರಿಯಂ ಮೀನು ಸಾಕಾಣಿಕೆ ತರಬೇತಿ ಕಾರ್ಯಾಗಾರ ಎಪಿಎಂಸಿ ರಸ್ತೆಯ ಕ್ರಿಸ್ಟೋಪರ್ ಕಾಂಪ್ಲೆಕ್ಸ್‌ನಲ್ಲಿರುವ ಸುದ್ದಿ ಕೃಷಿ ಮಾಹಿತಿ ಕೇಂದ್ರದಲ್ಲಿ ನಡೆಯಲಿದೆ.

ಮನೆಯಲ್ಲಿರುವ ಸ್ವಲ್ಪ ಜಾಗದಲ್ಲಿ ಟರ್ಪಲ್ ತೊಟ್ಟಿ, ಮೀನಿನ ಬಾಕ್ಸ್, ಪ್ಲಾಸ್ಟಿಕ್ ಬಕೆಟ್ ಇತ್ಯಾದಿ ಬಾಕ್ಸ್‌ಗಳಲ್ಲಿ ಅಕ್ವೇರಿಯ ಮೀನು ಸಾಕಾಣಿಕೆ ಮಾಡಿ ತಿಂಗಳಿಗೆ 10ರಿಂದ 20ಸಾವಿರದವರೆಗೆ ಸಂಪಾದಿಸುವ ಕುರಿತು ತರಬೇತಿ ನಡೆಯಲಿದೆ. ಕಾರ್ಕಳ ಮತ್ಸ್ಯ ಕನ್ಯಾ ಅಕ್ವೇರಿಯಂನ ಶಶಿಕುಮಾರ್ ತರಬೇತಿ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಆಸಕ್ತರು ಹೆಸರು ನೋಂದಾಯಿಸಲು ಅರಿವು ಕೃಷಿ ಕೇಂದ್ರ ಮೊ: 6364570738 ಹಾಗೂ 8050293990 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here