ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಬೆಳ್ಳಿ ಪಲ್ಲಕ್ಕಿ ಉತ್ಸವ

0

ಉಪ್ಪಿನಂಗಡಿ: ರಾಮನವಮಿ ಅಂಗವಾಗಿ ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ರಾತ್ರಿ ಪೂಜೆ ಬಳಿಕ ರಥಬೀದಿಯಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀದೇವರ ಉತ್ಸವ, ವಸಂತ ಪೂಜೆ ವಿಜ್ರಂಭಣೆಯಿಂದ ನಡೆಯಿತು.


ಈ ಸಂದರ್ಭದಲ್ಲಿ ದೇವಾಲಯದ ಅಡಳಿತ ಮೊಕ್ತೇಸರರಾದ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಯು.ನಾಗರಾಜ ಭಟ್, ಕೆ. ಅನಂತರಾಯ ಕಿಣಿ, ಡಾ. ಎಂ. ಆರ್.ಶೆಣೈ, ಕೆ. ದೇವಿದಾಸ ಭಟ್ ಪ್ರಮುಖರಾದ ಕೆ.ಸತೀಶ ಕಿಣಿ, ಕರಾಯ ಗಿರೀಶ ನಾಯಕ್, ಕರಾಯ ನಾಗೇಶ್ ನಾಯಕ್, ಮಂಜಳೇಶ್ ಭಟ್, ಕೆ.ರಾಘವೇಂದ್ರ ಪ್ರಭು, ಎಂ.ಎಸ್. ಭಟ್ ಲಕ್ಷ್ಮೀನಗರ, ಸತ್ಯಪ್ರಸಾದ್ ಭಟ್, ಸ್ವಾತಿಕ್ ಪಡಿಯಾರ್, ವೆಂಕಟೇಶ್ ಕಿಣಿ ವೈ, ವೆಂಕಟೇಶ ಶೆಣೈ ಮತಿತ್ತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here