ಶಾಂತಿಗೋಡು‌ ಗ್ರಾಮದ ಪಂಜಿಗ ತೋಟದಲ್ಲಿ ಆನೆ ಹೆಜ್ಜೆ ಗುರುತು ! – ಕೃಷಿ ಹಾನಿ ಮಾಡಿ ಪಕ್ಕದ ಕಾಡನ್ನು ಸೇರಿದ ಕಾಡಾನೆಗಳು

0

ಪುತ್ತೂರು: ತಾನು ಹೋದದ್ದೆ ದಾರಿ ಎಂಬಂತೆ ಕಳೆದ ಎರಡು ದಿನಗಳಿಂದ ಬೆಳ್ಳಿಪ್ಪಾಡಿ ಗ್ರಾಮ ಮತ್ತು ಶಾಂತಿಗೋಡು ಗ್ರಾಮದ ನಡುವೆ ಸುತ್ತಾಡುತ್ತಿರುವ ಕಾಡಾನೆಗಳೆರಡು ಜೂ.13ರಂದು ಶಾಂತಿಗೋಡು / ಚಿಕ್ಕಮುಡ್ನೂರು ಗ್ರಾಮದ ನಡುವೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಂತಿಗೋಡು ಗ್ರಾಮದ ಪಂಜಿಗದಲ್ಲಿ ಜೂ.13ರ ಬೆಳಿಗ್ಗೆ ಆನೆ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಬೆಳ್ಳಿಪ್ಪಾಡಿ ಕೊಡಿಮರದಿಂದ ಹೊಳೆ ದಾಟಿದ ಆನೆ ಅಲ್ಲಿಂದ ಬೆದ್ರಾಳ ತೋಡು ಮೂಲಕ ಚಿಕ್ಕಮುಡ್ನೂರು ಗ್ರಾಮದ ಧನ್ಯ ಕುಮಾರ್ ಜೈನ್ ಎಣಿಮೊಗರು ಅವರ ತೋಟದಲ್ಲಿ ಹೋಗಿದ್ದು, ಅಲ್ಲಿಂದ ಮುಂದೆ ಶಾಂತೊಗೋಡು ಗ್ರಾಮದ ಪಂಜಿಗ ವಸಂತಕುಮಾರ್ ಪಂಜಿಗ ಅವರ ತೋಟ ಸಹಿತ ಇತರ ಸ್ಥಳೀಯರ ತೋಟದ ಮೂಲಕ ಭಜನಾ ಮಂದಿರ ಪಕ್ಕದಲ್ಲಿರುವ ಕಾಡನ್ನು ಸೇರಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here