ಜಿಡೆಕಲ್ಲು ಬೆಂಕಿ ಅನಾಹುತ-ಪುತ್ತೂರು ಪ್ರಶಾಂತಿ ಸದ್ಭಾವನಾ ಟ್ರಸ್ಟ್‌ನಿಂದ ಸಹಾಯಾಸ್ತ

0

ಪುತ್ತೂರು: ಜಿಡೇಕಲ್ಲು ನಿವಾಸಿ ಮೋನಪ್ಪ ಜೋಗಿ ಎಂಬವರ ಮನೆಯಲ್ಲಿ ಜೂ 18ರಂದು ಮನೆಯ ಪ್ರಿಡ್ಜ್‌ ಬ್ಲಾಸ್ಟ್‌ ಆಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತನ್ನ ಭಾಗಶಃ ಮನೆಯೂ ಬೆಂಕಿಗಾಹುತಿಯಾಗಿದ್ದು, ಮನೆಯ ಪಶ್ಚಿಮ ಭಾಗದ ಮನೆಯ ಹಂಚುಗಳು ಬಿದ್ದು ಅಪಾರ ನಷ್ಟ ಸಂಭವಿಸಿದ್ದು, ಅಗ್ನಿ ಶಾಮಕದಳದವರು ಬೆಂಕಿ ನಂದಿಸಿದ್ದಾರೆ.


ಅಪಾರ ಪ್ರಮಾಣದಲ್ಲಿ ಆದ ನಷ್ಟದ ಕುರಿತು ಅರಿತ ಪುತ್ತೂರು ಪ್ರಶಾಂತಿ ಸದ್ಭಾವನಾ ಟ್ರಸ್ಟ್‌ ನ ಉಮೇಶ್‌ ಪೂಜಾರಿ, ಎಂ ಮಧುಸೂಧನ್‌ ನಾಯಕ್‌, ಸದಾಶಿವ ರಾವ್‌ ವೈ ಎಸ್‌, ದಯಾನಂದ ಅವರು 10000/ ರೂ. ವನ್ನು ಸಹಾಯಧನವನ್ನು ಟ್ರಸ್ಟ್‌ ವತಿಯಿಂದ ನೀಡಿದರು.

LEAVE A REPLY

Please enter your comment!
Please enter your name here