ಪುತ್ತೂರು: ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ದಿವಸ ಆಚರಣೆ ಮತ್ತು ಶ್ರೀ ಸತ್ಯನಾರಾಯಣ ಪೂಜೆಯ ಎ.22ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ಬೆಳಿಗ್ಗೆ ಪ್ರಾರ್ಥನೆ, ಗಣಪತಿ ಹೋಮ, ಕಲಶ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ದೇವರಿಗೆ ಏಕದಶಾ ರುದ್ರಾಭಿಷೇಕ, ಸೀಯಾಳ ಅಭಿಷೇಕ, ಕಲಶಾಭಿಷೇಕ, ಮಹಾಪೂಜೆ ನಡೆದ ಬಳಿಕ ಶ್ರೀ ಸತ್ಯನಾರಾಯಣ ಪೂಜೆಯ ಮಂಗಳಾರತಿ ನಡೆದು ಪ್ರಸಾದ ವಿತರಣೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಣಪ್ಪ ಮೂಲ್ಯ, ಸದಸ್ಯರಾದ ದಯಾನಂದ ಜೈನರಗುರಿ, ಮಹಾಬಲ ಪೂಜಾರಿ, ಚಂದ್ರಾಕ್ಷ ಬಿ.ಎನ್ ಪಟ್ಟೆ, ಬಾಲಕೃಷ್ಣ ಗೌಡ ಗೋಳ್ತಿಲ, ವಿನೋದ್ ಆನೆಮಜಲು, ರೇವತಿ ಜೆ ರೈ, ಸುಮಲತಾ ಹಲಂಗ, ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಹಲಂಗ, ಗೌರವ ಸಲಹೆಗಾರರಾದ ರಾಜಶೇಖರ್ ಜೈನ್ ನಿರ್ಪಾಜೆ, ರಾಘವೇಂದ್ರ ವಿ, ಶೀನಪ್ಪ ಗೌಡ ದೇವಸ್ಯ, ಉತ್ಸವ ಸಮಿತಿ ಗೌರವಾಧ್ಯಕ್ಷ ಶಶಿಧರ ಗೌಡ ಕುಂಟ್ಯಾನ, ಅಧ್ಯಕ್ಷ ಹರೀಶ್ ಕುಲಾಲ್ ನೆಕ್ಕಿಲ, ಉಪಾಧ್ಯಕ್ಷರಾದ ಮನೋಹರ ಐ ಮಾರ್ನಡ್ಕ, ಮೌನೀಶ್ ಎನ್ ಆನೆಮಜಲು ಸಹಿತ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
