ಕಣಿಯೂರು: ತನ್ನೋಜಿ ಶ್ರೀ ಮಹಾಲಿಂಗೇಶ್ವರಿ ದೇವಸ್ಥಾನ ಹಲೇಜಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಕ್ಕಿಲು ಇಲ್ಲಿನ ಮುಖ್ಯ ಶಿಕ್ಷಕರಾದ ಬಿ. ಎಸ್ ಬಿರಾದಾರ್ ಅವರನ್ನು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸುಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಮತ್ತು ಸೇವಾ ಸಮಿತಿ ಊರ ಮಹನೀಯರ ಸಮ್ಮಖದಲ್ಲಿ ಅ.5ರಂದು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿ ಅಜಿತ್ ಕುಮಾರ್, ಕಾರ್ಯಧ್ಯಕ್ಷರಾಗಿ ಸುಧೀರ್ ಕುಮಾರ್, ಕಾರ್ಯದರ್ಶಿ ವಿಜಯ ಕುಮಾರ್ ಮತ್ತು ಮಹಾಬಲ ಶೆಟ್ಟಿ, ಸರಿತ ಸುಧೀರ್, ಜ್ಯೋತಿ ಮೂರ್ತಿ ಭಟ್, ಮಾಲತಿ, ವಾಸು ನಾಯ್ಕ, ಗಣೇಶ, ಯಶೋಧರ, ಸುರೇಶ ಹೆಚ್. ಎಲ್, ಆನಂದ ಶೆಟ್ಟಿಹಾಗೂ ಸ್ಥಳೀಯ ವಿಧ್ಯಾಭಿಮಾನಿಗಳು ಉಪಸ್ಥಿತರಿದ್ದರು.