ಸ. ಉ. ಹಿ. ಪ್ರಾ ಶಾಲೆ ಕುವೆಟ್ಟು ಇದರ ಅಮೃತಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕುವೆಟ್ಟು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುವೆಟ್ಟು ಇದರ ಅಮೃತ ಮಹೋತ್ಸವ ಕಾರ್ಯಕ್ರಮವು ಡಿ 17ರಂದು ನಡೆಯಲಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನ.21ರಂದು ಶಾಲೆಯಲ್ಲಿ ಜರುಗಿತು.

ಶಾಲಾ ಹಿರಿಯ ವಿದ್ಯಾರ್ಥಿ ತಸ್ಲಿಮ್ ಆರಿಪ್ ಉದ್ಯಮಿಗಳು ಬೆಂಗಳೂರು ಹಾಗೂ ಹಿರಿಯ ವಿಧ್ಯಾರ್ಥಿ ಮಾಜಿ ಶಾಸಕ ಕೆ ಪ್ರಭಾಕರ ಬಂಗೇರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸಿರಾಜ್ ಚಿಲಿಂಬಿ ಮದ್ದಡ್ಕ, ಉಪಾಧ್ಯಕ್ಷೆ ಜಾನಕಿ, ಮುಖ್ಯ ಶಿಕ್ಷಕ ಭಾಸ್ಕರ್, ನಿವೃತ್ತ ಬ್ಯಾಂಕ್ ಮೆನೇಜರ್ ಗೋವಿಂದ ಭಟ್, ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಶಾಲಾ ಹಿರಿಯ ವಿಧ್ಯಾರ್ಥಿ ಮಡತ್ಯಾರು ಗ್ರಾಮ ಪಂ ಸದಸ್ಯ ವಿಶ್ವನಾಥ್ ಪೂಜಾರಿ ಹಾರಬೆ, ಶಾಲಾ ನಾಯಕಿ ಸುಅದ ಮರಿಯಂ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ್ ಬಿ ಶೆಟ್ಟಿ ಪೆರಂಗೊಡಿ ಹಾಗೂ ಅಧ್ಯಾಪಕ ವೃಂದ ಎಸ್ ಡಿ ಎಂ ಸಿ ಸದಸ್ಯರು ಹಿರಿಯ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here