ನೆಲ್ಯಾಡಿ ಜೆಸಿಐ 2022ನೇ ಸಾಲಿನ ಘಟಕಾಡಳಿತ ಮಂಡಳಿ ಪದಗ್ರಹಣ

0

 

ನೆಲ್ಯಾಡಿ: ಜೆಸಿಐ ನೆಲ್ಯಾಡಿ ಇದರ 2022ನೇ ಸಾಲಿನ ಘಟಕಾಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಜ.೩೧ರಂದು ಸಂಜೆ ನೆಲ್ಯಾಡಿ ಸರಕಾರಿ ಉನ್ನತ ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ರವರು ಉದ್ಘಾಟಿಸಿ ಶುಭಹಾರೈಸಿದರು. ಜೆಸಿಐ ವಲಯ ೧೫ರ ವಲಯಾಧ್ಯಕ್ಷ ರೋಯನ್ ಉದಯ ಕ್ರಾಸ್ತಾ, ವಲಯ ಉಪಾಧ್ಯಕ್ಷೆ ಸ್ವಾತಿ ಜೆ.ರೈಯವರು ಸಂದರ್ಭೋಚಿತವಾಗಿ ಮಾತನಾಡಿ ನೂತನ ಘಟಕಕ್ಕೆ ಶುಭ ಹಾರೈಸಿದರು. ನಿರ್ಗಮನ ಅಧ್ಯಕ್ಷ ಗಿರೀಶ್ ಡಿ.,ಯವರು ೨೦೨೨ನೇ ಸಾಲಿನ ಅಧ್ಯಕ್ಷೆ ಜಯಂತಿ ಬಿ.ಎಂ.ರವರಿಗೆ ಅಧಿಕಾರ ಹಸ್ತಾಂತರಿಸಿದರು. ನವ್ಯಾಪ್ರಸಾದ್ ಹಾಗೂ ವಿನ್ಯಾಸ್ ಬಂಟ್ರಿಯಾಲ್ ರವರು ಈ ಸಂದರ್ಭದಲ್ಲಿ ಜೆಸಿಐ ನೆಲ್ಯಾಡಿ ಘಟಕಕ್ಕೆ ಸೇರ್ಪಡೆ ಗೊಂಡರು.

 

೨೦೨೧ನೇ ಸಾಲಿನ ಕಾರ್ಯದರ್ಶಿ ಸುನಿಲ್ ಶೆಟ್ಟಿ, ಜೇಸಿರೆಟ್ ಅಧ್ಯಕ್ಷೆ ಕಸ್ತೂರಿ, ಜೆಜೆಸಿ ಅಧ್ಯಕ್ಷೆ ಭವಿಷ್ಯ ಜೆ.ಆರ್., ೨೦೨೨ನೇ ಸಾಲಿನ ಕಾರ್ಯದರ್ಶಿ ಪ್ರವೀಣ್ ಎಸ್.ಎಂ., ಜೇಸಿರೆಟ್ ಅಧ್ಯಕ್ಷೆ ಜಯಲಕ್ಷ್ಮಿ ಪ್ರಸಾದ್, ಜೆಜೆಸಿ ಅಧ್ಯಕ್ಷ ಅಕ್ಷಯ್, ಯೋಜನಾ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಪುರಂದರ ಗೌಡ ಡೆಂಜ, ನಿಕಟ ಪೂವಾರ್ವಧ್ಯಕ್ಷ ಶಿವಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
೨೦೨೧ನೇ ಸಾಲಿನ ಸಾಧನಾಶ್ರೀ ಪ್ರಶಸ್ತಿ ಪುರಸ್ಕೃತ, ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷ ಚಂದ್ರಶೇಖರ್ ಬಾಣಜಾಲುರವರನ್ನು ಕಾರ್ಯಕ್ರಮ ದಲ್ಲಿ ಸನ್ಮಾನಿಸಲಾಯಿತು. ಅತಿಥಿಗಳಾಗಿದ್ದ ರಾಮಕೃಷ್ಣ ಮಲ್ಲಾರ, ಉದಯ ಕ್ರಾಸ್ತಾ, ಸ್ವಾತಿ ಜೆ.ರೈ, ಯೋಜನಾ ನಿರ್ದೇಶಕ ಜಯಾನಂದ ಬಂಟ್ರಿಯಾಲ್, ನಿಕಟ ಪೂವಾಧ್ಯಕ್ಷ ಶಿವಪ್ರಸಾದ್, ೨೦೨೧ನೇ ಸಾಲಿನ ಅಧ್ಯಕ್ಷ ಗಿರೀಶ್ ಡಿ., ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಘಟಕದ ಪೂರ್ವಾಧ್ಯಕ್ಷರುಗಳಿಗೆ ಶಾಲು ಹಾಗೂ ೨೦೨೧ನೇ ಸಾಲಿನ ಘಟಕಾಡಳಿತ ಮಂಡಳಿ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.


ಪೂವಾರ್ವಧ್ಯಕ್ಷ ರವೀಂದ್ರ ಟಿ., ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಗಿರೀಶ್ ಡಿ., ಸ್ವಾಗತಿಸಿದರು. ಪೂವಾರ್ವಧ್ಯಕ್ಷರಾದ ಪುರಂದರ ಗೌಡ ಡೆಂಜ, ಪ್ರಕಾಶ್ ಕೆ.ವೈ., ಜಾನ್ ಪಿ.ಎಸ್.ರವರು ಅತಿಥಿಗಳನ್ನು ಪರಿಚಯಿಸಿದರು. ಸುಚಿತ್ರಾ ಜೆ.ಬಂಟ್ರಿಯಾಲ್ ಜೇಸಿವಾಣಿ ವಾಚಿಸಿದರು.

LEAVE A REPLY

Please enter your comment!
Please enter your name here