ಪುತ್ತೂರು: ಶ್ರೀ ಜಲದುರ್ಗಾ ದೇವಿ ಭಜನಾ ಮಂಡಳಿ ಪೆರುವಾಜೆ , ಶ್ರೀ ಜಲದುರ್ಗಾ ದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ
ಇವರ ಸಂಯುಕ್ತ ಆಶ್ರಯದಲ್ಲಿ ಮಾ. 4 ರಂದು ಶ್ರೀ ಕ್ಷೇತ್ರದಲ್ಲಿ 20 ನೇ ವರ್ಷದ ಏಕಾಹ ಭಜನೆ ಪ್ರಾರಂಭಗೊಂಡಿತು.
ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪ್ರಾರ್ಥನೆಯೊಂದಿಗೆ ಸಹ ಅರ್ಚಕ ರಾಮಚಂದ್ರ ಶಬಾರಾಯ ದೀಪ ಬೆಳಗಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ. ಪದ್ಮನಾಭ ಶೆಟ್ಟಿ, ಸಮಿತಿ ಸದಸ್ಯರುಗಳಾದ ಜಯಪ್ರಕಾಶ್ ರೈ, ದಾಮೋದರ ನಾಯ್ಕ, ಜಗನ್ನಾಥ ರೈ, ಭಜನಾ ಮಂಡಳಿಯ ಅಧ್ಯಕ್ಷ ಲೋಕನಾಥ ಶೆಟ್ಟಿ ಹಾಗೂ ಸರ್ವ ಸದಸ್ಯರು,ಪದ್ಮನಾಭ ಕೆ.ನೆಟ್ಟಾರು, ದೇವಾಲಯದ ಸಿಬ್ಬಂದಿ ವಸಂತ ಆಚಾರ್ಯ ಮತ್ತು ಇತರರು ಉಪಸ್ಥಿತರಿದ್ದರು.