ಗೋಪಾಲಕೃಷ್ಣ ಗೌಡ ಕುದ್ವ ನಿಧನ

0

 

 

ಕೂತ್ಕುಂಜ ಗ್ರಾಮದ ಕುದ್ವ ಗೋಪಾಲಕೃಷ್ಣ ಗೌಡ (62ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ.21ರಂದು ಮುಂಜಾನೆ ನಿಧನರಾದರು.

ಅವರು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮಾಜಿ ಸದಸ್ಯ,ಪಂಜ ಜಾತ್ರೋತ್ಸವದಲ್ಲಿ ಹಸಿರು ಕಾಣಿಕೆ ಸಂಗ್ರಹದ ಸಂಚಾಲಕರಾಗಿ ವಿಶೇಷವಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದ್ದರು,ಪಂಜದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾಗಿ , ಅನೇಕ ವರುಷಗಳಿಂದ ಶಿವಶಕ್ತಿ ಸೌಂಡ್ಸ್ ಮತ್ತು ಲೈಟಿಂಗ್ಸ್ ಡೆಕೋರೇಷನ್ ಸಂಸ್ಥೆಯನ್ನು ನಡೆಸುತ್ತಿದ್ದು ಪಂಜ ಪರಿಸರದಲ್ಲಿ ಅವರು ಚಿರಪರಿಚಿತರು.ಮತ್ತು ಅನೇಕ ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಮೃತರು ಪತ್ನಿ ಶ್ರೀಮತಿ ಭವಾನಿ, ಪುತ್ರ ಪಂಜ ಗ್ರಾಮ ಪಂಚಾಯತ್ ಸದಸ್ಯ ಶರತ್ ಕುದ್ವ, ಪುತ್ರಿಯರಾದ ಶ್ರೀಮತಿ ಶಿಲ್ಪಾ ರಮೇಶ್ ಬಿಳಿಮಲೆ, ಶ್ವೇತಾ , ಮೊಮ್ಮಗ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here