ಯಕ್ಷ ರಂಗಾಯಣ ಸಂಚಾರಿ ರಂಗತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ

0

 
ಕಾರ್ಕಳ ಯಕ್ಷ ರಂಗಾಯಣವು ಹೊಸದಾಗಿ ಆರಂಭಿಸುವ  ಅಲ್ಪ ಅವಧಿ(3 ತಿಂಗಳು)ಯ ಸಂಚಾರಿ ರಂಗ ತಂಡಕ್ಕೆ ಕಲಾವಿದರನ್ನು ಆಹ್ವಾನಿಸಲಾಗಿದೆ.
ರಂಗಭೂಮಿಯಲ್ಲಿ ಕೆಲಸ ಮಾಡಿ ಅನುಭವವಿರುವ,
ತಾಳ- ಲಯ-ಸಂಗೀತ-ಕುಣಿತದ ಕನಿಷ್ಠ ಜ್ಞಾನವಿರುವ,ಕನ್ನಡವನ್ನು ಸ್ಪಷ್ಟವಾಗಿ ಓದಲು- ಉಚ್ಛರಿಸಲು ಬರುವ 18 ರಿಂದ 30 ವರ್ಷದೊಳಗಿನ ಕಲಾವಿದರು ಅರ್ಜಿ ಸಲ್ಲಿಸಬಹುದು.ಆಯ್ಕೆಯಾದವರಿಗೆ ಸರ್ಕಾರದ ನಿಯಮಾನುಸಾರ ಮಾಸಿಕ ವೇತನ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರದೊಂದಿಗೆ ತಮ್ಮ ಸಂಪೂರ್ಣ ಸ್ವ- ವಿವರಗಳನ್ನು 25-10-2022 ರೊಳಗೆ ವಿಶೇಷ ಕರ್ತವ್ಯಾಧಿಕಾರಿ, ಯಕ್ಷ ರಂಗಾಯಣ
ಕೋಟಿ ಚೆನ್ನಯ ಥೀಂ ಪಾರ್ಕ್, ಅಂಚೆ: ಕಾರ್ಕಳ (ಉಡುಪಿ ಜಿಲ್ಲೆ)
ಈ ವಿಳಾಸಕ್ಕೆ ಕಳುಹಿಸಬೇಕು.
ಸಂದರ್ಶನದ ದಿನಾಂಕವನ್ನು ದೂರವಾಣಿ ಮೂಲಕ ತಿಳಿಸಲಾಗುವುದು ಎಂದು ಯಕ್ಷ ರಂಗಾಯಣದ ನಿರ್ದೇಶಕರಾದ ಜೀವನ್ ರಾಂ ಸುಳ್ಯ(9448215946) ಮತ್ತು ವಿಶೇಷ ಕರ್ತವ್ಯಾಧಿಕಾರಿಗಳಾದ ಶ್ರೀಮತಿ ಪೂರ್ಣಿಮಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here