ಪುತ್ತೂರು: ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು ಇದರ ಕಾರ್ಯಕಾರಿ ಸಮಿತಿ ಹಾಗೂ ಬಿರುಮಲೆ ಬೆಟ್ಟದ ಅಭಿಮಾನಿ ಬಂಧುಗಳಿಂದ, ಅಗಲಿದ ಹಿರಿಯ ಚೇತನ ಬಿರುಮಲೆ ಬೆಟ್ಟ ಹಾಗೂ ಸಮಗ್ರ ಪುತ್ತೂರಿನ ಅಭಿವೃದ್ಧಿಯ ಹರಿಕಾರ ಎಂದು ಜನಜನಿತರಾಗಿದ್ದ ನಿವೃತ್ತ ತಹಶೀಲ್ದಾರ್ ಚಿಲ್ಕೆತ್ತಾರು ಕೋಚಣ್ಣ ರೈ ಯವರಿಗೆ ಕಂಬನಿಯ ಮಾಲೆಗಳೊಂದಿಗೆ ಅವರ ಅವಿನಾಭಾವ ಸಂಬಂಧ ಹೊಂದಿದ್ದ ಬಿರುಮಲೆ ಬೆಟ್ಟದ ಗಾಂಧಿ ಮಂಟಪದ ನೆಲದಲ್ಲಿ ಶ್ರದ್ದಾಂಜಲಿ ಅರ್ಪಿಸಲಾಯಿತು.
ಆಹ್ವಾನಿತ ಅಭ್ಯಾಗತರಾಗಿ ಅರಣ್ಯ ಇಲಾಖಾ ಅಧಿಕಾರಿಗಳಾದ ಪಿ.ವಿ. ಕಾರ್ಯಪ್ಪ, ಶ್ರೀ ಶಿವಾನಂದ ಆಚಾರ್ಯ, ಯಸ್. ಆರ್. ಸಿ.ಸಿ. ನಿವೃತ್ತ ಅಧಿಕಾರಿ ಯದುಕುಮಾರ್ ಕೊಳತ್ತಾಯ ಹಾಗೂ ಸದಸ್ಯರುಗಳಾದ ಎ.ವಿ ನಾರಾಯಣ (ಅಧ್ಯಕ್ಷರು), ಸಂತೋಷ್ ಕುಮಾರ್, ದೇವದಾಸ ಆಳ್ವ, ನಿತಿನ್ ಪಕ್ಕಳ, ದತ್ತಾತ್ರೇಯ ರಾವ್, ಸುಬ್ರಾಯ ಅಮ್ಮಣ್ಣಾಯ, ಯಂ. ಯಸ್. ರಘುನಾಥ್ ರಾವ್ , ಎ. ಜೆ. ರೈ, ಬಾಲಕೃಷ್ಣ ಕೊಳತ್ತಾಯ, ಯಸ್. ಜಯಪ್ರಕಾಶ್ ರೈ ಮೊದಲಾದವರು ಕೋಚಣ್ಣ ರೈಗಳ ಒಳನಾಟದ ಅನುಭವಕ್ಕೆ ಅನುಗುಣವಾಗಿ ನುಡಿ ನಮನಗಳನ್ನು ಅರ್ಪಿಸಿದರು.