ಬಡಗನ್ನೂರು: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಸಾರಕೂಟೇಲು- ಭಂಡಾರತ್ತಡ್ಕ .ಶ್ರೀ ನಾಗದೇವರು, ರಕ್ತೇಶ್ವರಿ ಮತ್ತು ಗುಳಿಗ ಸನ್ನಿಧಿಗಳ ಬ್ರಹ್ಮಕಲಶಾಭಿಷೇಕ ಹಾಗೂ ತಂಬಿಲ ಸೇವೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಮೇ 7 ಮತ್ತು 8 ರಂದು ನಡೆಯಲ್ಲಿದ್ದು ಇದರ ಬಗ್ಗೆ ಪೂರ್ವಭಾವಿ ಸಭೆಯು ಏ 10 ರಂದು ಶ್ರೀ ಸನ್ನಿಧಿ ವಠಾರದಲ್ಲಿ ಸಮಿತಿ ಅಧ್ಯಕ್ಷ ಶಂಕರ ನಾರಾಯಣ ಪ್ರಸಾದ ಕಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಅಮಂತ್ರಣ ಪತ್ರಿಕೆ ವಿತರಣೆ, ಮತ್ತು ಇತರ ವಿಚಾರಗಳ ಬಗ್ಗೆ ಚರ್ಚಿಸಿ ಸಭೆಯಿಂದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಯಿತು.
ಸಭೆಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಗಣೇಶ ಕುಮಾರ್ ಪಾದೆಕರ್ಯ, ಸಮಿತಿ ಸದಸ್ಯರಾದ ಶ್ಯಾಮ ಸುಂದರ ಭಟ್ ಬಟ್ಯಡ್ಕ, ಶಿವರಾಮ ಕೃಷ್ಣ ಭಟ್ ಶ್ರೀ ಶೈಲ ಪಟ್ಟಾಜೆ, ಕೊರಗಪ್ಪ ನಾಯ್ಕ ಸಾರಕೂಟೇಲು, ಮಹಾಲಿಂಗ ನಾಯ್ಕ ಬಾಳೆಕೊಚ್ಚಿ, ಬಾಬು ನಾಯ್ಕ ಸೋಣಂಗೇರಿ, ಕಿಶೋರ್ ಸೋಣಂಗೇರಿ ದೀ ಪಿತ್ ಎಸ್ ಸೋಣಂಗೇರಿ, ರವಿ ಸೋಣಂಗೇರಿ, ಮಹೇಶ್ ದಡ್ಡಲಗುಂಡಿ ,ಸೀತಾರಾಮ ಮೋಡಿಕೆ, ದೇವಪ್ಪ ನಾಯ್ಕ ಗುಳಿಗಗುಂಡಿ, ಕಿಶನ್ ಮಾಣಿಯಡ್ಕ, ನಾರಾಯಣ ನಾಯ್ಕ ಶರವು,ರಮೇಶ್ ಅಂಬಟೆಮೂಲೆ, ಸೀತಾರಾಮ ಮೂಂಡೋಳೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು