ಆತೂರು: SKSSF ಆತೂರು ಶಾಖೆ ಇದರ ವತಿಯಿಂದ ಸಯ್ಯದ್ ಹೈದರ್ ಅಲಿ ಶಿಹಾಬ್ ತಂಗಳ್ ರವರ 40ನೇ ದಿನದ ಪ್ರಯುಕ್ತ ತಹ್ಲೀಲ್ ಸಮರ್ಪಣೆ ಹಾಗು ಇಫ್ತಾರ್ ಕೂಟ ದಿನಾಂಕ 14 ಏಪ್ರಿಲ್ 2022 ರಂದು ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆಯಿತು.
ಸಯ್ಯದ್ ಜುನೈದ್ ಜಿಫ್ರಿ ತಂಗಳ್ ಆತೂರು ನೇತೃತ್ವದಲ್ಲಿ ತಹ್ಲೀಲ್ ಸಮರ್ಪಣೆ ನಡೆಯಿತು. ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಜಮಾಹತ್ ಅಧ್ಯಕ್ಷರಾದ ಅಹಮದ್ ಕುಂಞಿ, ಕಾರ್ಯದರ್ಶಿ ಸಿರಾಜ್ ಬಡ್ಡಿಮೆ, SKSSF ಶಾಖೆ ಅಧ್ಯಕ್ಷರಾದ ಬಿ ಕೆ ಅಬ್ದುಲ್ ರಝಕ್, ಕಾರ್ಯದರ್ಶಿ ಎನ್ ಸಿದ್ದಿಕ್, ಉಪಾಧ್ಯಕ್ಷರಾದ ಬಿ ಆರ್ ಅಬ್ದುಲ್ ಖಾದರ್, ಸಂಘಟನೆ ಕಾರ್ಯದರ್ಶಿ ಉಮರುಲ್ ಫಾರೂಕ್, ನಾಸಿರ್ ಮರೋಡಿ, ಜೈನದ್ದಿನ್, ಅಝೀಝ್, ಮುನೀರ್, ಜಮಾಹತರು ಹಾಗು SKSSF ಕಾರ್ಯಕರ್ತರು ಭಾಗವಹಿಸಿದರು.