ಉಪ್ಪಿನಂಗಡಿ: ಕುಂಟಿನಿ ಎಂಬಲ್ಲಿ ಮಾತೃಶ್ರೀ ಒಕ್ಕಲಿಗ ಸ್ವಸಹಾಯ ಸಂಘ ರಚನೆ ಮಾಡಲಾಯಿತು. ಆನಂದ ಗೌಡರವರು ಸಂಘವನ್ನು ಉದ್ಘಾಟಿಸಿ ಸಭಾ ನಡುವಳಿಯನ್ನು ಹಸ್ತಾಂತರಿಸಿದರು. ಸಂಘದ ಪ್ರಬಂಧಕರಾಗಿ ಶಶಿಕಲಾ, ಸಂಯೋಜಕರಾಗಿ ಸುಶೀಲರವರನ್ನು ಆಯ್ಕೆ ಮಾಡಲಾಯಿತು. ತಂಡದ ಮೇಲ್ವಿಚಾರಕಿ ಸುಮಲತಾ, ಪ್ರೇರಕರಾದ ತಾರಾನಾಥ್, ಹೇಮಲತಾ, ಕುಸುಮ, ಕೇಶವ್ ಗೌಡ, ಯಶೋಧ, ಸೀತಾ .ಕೆ , ದೇವಪ್ಪ ಗೌಡ, ಸರೋಜಿನಿ, ರಮೇಶಗೌಡ, ಸೀತಮ್ಮ ಸಂಘದ ಇತರ ಸದಸ್ಯರು ಉಪಸ್ಥಿತರಿದ್ದರು.