ಪುತ್ತೂರು : ಲೋಕ ಕಲ್ಯಾಣಾರ್ಥ ಮತ್ತು ಸಮೃದ್ಧ ಮಳೆ ಬೆಳೆಗಾಗಿ ನಾಡಿಗೆ ಸುಭಿಕ್ಷೆಯನ್ನು ಪ್ರಾರ್ಥಿಸಿ ಮೇ.28ರಂದು ಬೆಳಿಗ್ಗೆ 10ರಿಂದ ಪುತ್ತೂರು ಶ್ರಿಶಾಂತಿನಾಥ ಸ್ವಾಮಿಗೆ ಸೀಯಾಳಾಭಿಷೇಕ ನಡೆಯಲಿದೆ. ಎಲ್ಲಾ ಶ್ರಾವಕ ಬಂಧುಗಳು ಸೀಯಾಳಗಳನ್ನು ಸಮರ್ಪಿಸಿ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಕಟಣೆ ತಿಳಿಸಿದೆ.