ಸಂಪ್ಯ :ವಿಷ್ಣು ಬಳಗ, ಆರ್ಯಾಪು ಗ್ರಾ.ಪಂ.ನಿಂದ ಸಂಪ್ಯ-ಕುಕ್ಕಾಡಿ ರಸ್ತೆ ದುರಸ್ತಿ

0

ಪುತ್ತೂರು: ತೀರಾ ಹದಗೆಟ್ಟು ವಾಹನ ಸಂಚಾರ ಹಾಗೂ ನಡೆದಾಡಲು ಅಯೋಗ್ಯವಾಗಿದ್ದ ಸಂಪ್ಯ-ಉದಯಗಿರಿ- ಕುಕ್ಕಾಡಿ ರಸ್ತೆಯನ್ನು ಆರ್ಯಾಪು ಗ್ರಾ.ಪಂ ಹಾಗೂ ಸಂಪ್ಯ ಶ್ರೀ ವಿಷ್ಣು ಬಳಗದ ನೇತೃತ್ವದಲ್ಲಿ ಜು.೭ರಂದು ಶ್ರಮದಾನದ ಮೂಲಕ ದುರಸ್ಥಿಗೊಳಿಸಿದರು.

ಕೆಸರುಮಯವಾಗಿ ರಸ್ತೆ ಹದಗೆಟ್ಟು ಕಳೆದ ಕೆಲ ದಿನಗಳಿಂದ ವಾಹನ ಸಂಚಾರ ಹಾಗೂ ನಡೆದಾಡಲು ಅಯೋಗ್ಯವಾಗಿದ್ದ ರಸ್ತೆಯ ದುಸ್ಥಿತಿಯನ್ನು ಮನಗಂಡು ಸಂಪ್ಯ ಉದಯಗಿರಿ ವಿಷ್ಣು ಬಳಗ ಆರ್ಯಾಪು ಗ್ರಾ.ಪಂ ನೆರವಿನೊಂದಿಗೆ ರಸ್ತೆಗೆ ಕಲ್ಲು ಹಾಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು ವಾಹನ ಸವಾರರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ವಿಷ್ಣು ಬಳಗ ಹಾಗೂ ಊರಿನ ಸುಮಾರು ಹತ್ತು ಮಂದಿ ರಸ್ತೆ ದುರಸ್ಥಿಯಲ್ಲಿ ಸಹಕರಿಸಿದ್ದರು

LEAVE A REPLY

Please enter your comment!
Please enter your name here