ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಕಂಬಳಕೋಡಿ ಗುಲಾಬಿರವರ ಮನೆಯಲ್ಲಿ ಸುಗಮ ಸಂಗೀತ ತರಗತಿ ಜು.8ರಂದು ಪ್ರಾರಂಭವಾಯಿತು.
ವಜ್ರಮಾತ ಭಜನಾ ಮಂಡಳಿಯ ಅಧ್ಯಕ್ಷೆ ನಯನಾ ರೈ ಉದ್ಘಾಟಿಸಿದರು. ಅತಿಥಿಯಾಗಿ ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೇಶವ ನಾಯಕ್ ಭಾಗವಹಿಸಿದ್ದರು. ಹೊನ್ನಮ್ಮ ಗೌಡ, ವಜ್ರಮಾತ ಭಜನಾ ಮಂಡಳಿಯ ಕಾರ್ಯದರ್ಶಿ ಶಾರದಾ ಕೇಶವ, ಸಂಗೀತ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಮಂಜುಳಾ ಗೌಡ ಮತ್ತು ಮಮತಾ ರವೀಂದ್ರ ಉಪಸ್ಥಿತರಿದ್ದರು. ಸಂಶ್ರುತಾ ಪ್ರಾರ್ಥಿಸಿದರು. ಸಂಗೀತ ಶಿಕ್ಷಕಿ ಕವಿತಾ ದಿನಕರ್ ನೇತೃತ್ವದಲ್ಲಿ ತರಗತಿ ನಡೆಯಲಿದೆ.