ಪುತ್ತೂರು: ಭಾರೀ ಮಳೆಯ ಕಾರಣಕ್ಕೆ ಬಡಗನ್ನೂರು ಗ್ರಾಮದ ಕುಡ್ಚಿಲದಲ್ಲಿ ಬಾವಿಯೊಂದು ಸಂಪೂರ್ಣವಾಗಿ ಕುಸಿದಿದ್ದು, ಮನೆಯೂ ಅಪಾಯದಲ್ಲಿದೆ.
ಕುಡ್ಚಿಲ ನಿವಾಸಿ ನಾಗರಾಜ ಆಚಾರ್ಯ ಎಂಬವರ ಮನೆಯ ಕುಡಿಯುವ ನೀರಿನ ಬಾವಿ ಮೂರು ದಿನಗಳ ಹಿಂದೆ ಭಾರೀ ಮಳೆಗೆ ಕುಸಿದಿದೆ. ಬಾವಿ ಕುಸಿದ ಪರಿಣಾಮ ಮನೆಯ ಪಕ್ಕದ ಧರೆಯೂ ಕುಸಿತವಾಗಿದ್ದು ವಾಸದ ಮನೆ ಅಪಾಯದಲ್ಲಿದೆ. ಬಾವಿ ಮಣ್ಣು ಪಾಲಾಗಿರುವ ಕಾರಣ ಇವರಿಗೆ ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ. ಘಟನಾ ಸ್ಥಳಕ್ಕೆ ಬಡಗನ್ನೂರು ಗ್ರಾಮಕರಣಿಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೀರಾ ಬಡತನದಲ್ಲಿರುವ ನಾಗರಾಜ ಆಚಾರ್ಯ ಕುಟುಂಬ ನಿರ್ವಾಹವಿಲ್ಲದೆ ಅಪಾಯಕಾರಿ ಮನೆಯಲ್ಲಿ ತಮ್ಮ ಮಕ್ಕಳೊಂದಿಗೆ ವಾಸವಾಗಿದ್ದಾರೆ