ಪುತ್ತೂರು: ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ ವೈದ್ಯರ ದಿನಾಚರಣೆಯ’ ಕೆ.ಎಸ್.ಬಿ.ಡಾಕ್ಟರ್ಸ್ ಡೇ ಪ್ರಶಸ್ತಿ’ ಪುರಸ್ಕೃತರಾಗಿರುವ ಪುತ್ತೂರು ಆದರ್ಶ ಆಸ್ಪತ್ರೆಯ ಸರ್ಜನ್ ಡಾ.ಎಂ.ಕೆ.ಪ್ರಸಾದ್ರವರಿಗೆ ಪುತ್ತೂರು ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ನೌಕರರ ವತಿಯಿಂದ ಜು.16ರಂದು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಗೌರವಾರ್ಪಣೆ ಮಾಡಲಾಯಿತು.
ಡಾ.ಎಂ.ಕೆ.ಪ್ರಸಾದ್ರವರಿಗೆ ಶಾಲುಹಾಕಿ, ಫಲಪುಷ್ಪ, ಜೊತೆಗೆ ಕ್ಯಾಂಪ್ಕೋ ಚಾಕೋಲೇಟ್ ನೀಡಿ ಗೌರವಿಸಲಾಯಿತು. ಕ್ಯಾಂಪ್ಕೋದ ನೌಕರರಾದ ರಮೇಶ್ ಗೌಡ ಬನ್ನೂರುರವರ ಪುತ್ರ ಎನ್.ಮನ್ನಿತ್ ಗೌಡರವರು ಬಿಡಿಸಿದ ಡಾ.ಎಂ.ಕೆ.ಪ್ರಸಾದ್ರವರ ಭಾವಚಿತ್ರವನ್ನು ಈ ವೇಳೆ ಡಾ.ಎಂ.ಕೆ.ಪ್ರಸಾದ್ರವರಿಗೆ ಹಸ್ತಾಂತರಿಸಲಾಯಿತು. ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯ ನೌಕರರ ಬೆಳಿಯಪ್ಪ ಗೌಡ, ನಿರಂಜನ್ ಎಮ್.ಎಸ್., ರವೀಂದ್ರ ಆನ ರಾಮಕುಂಜ, ಸೂರ್ಯಕುಮಾರ್, ಕಿರಣ್ ಕುಮಾರ್, ರಾಮಕೃಷ್ಣ ಶೆಣೈ, ರಮೇಶ್ ಗೌಡ ಬನ್ನೂರು, ಅಶೋಕ್ ಗೌಡ, ಲೋಕೇಶ್ ಸರ್ವೆ, ನಾರಾಯಣ ಗೌಡ ಅರಿಪ್ಪೆಕಟ್ಟೆ, ಅಶೋಕ್ ಕುಲಾಲ್ ಕೌಡಿಚ್ಚಾರ್, ಸಂಘದ ಅಧ್ಯಕ್ಷ ತೀರ್ಥರಾಮ ಎಸ್., ರವಿ ಎಮ್., ಪ್ರಮೋದ್ ಮಲ್ಲಾರ, ಗಣೇಶ್ ಪಿ, ಬಿ.ದೇವಪ್ಪ ನಾಕ್ ಚಂದಕೂಡ್ಲು, ರಮೇಶ್ ಕಾಯರ್ಮೊಗೇರು, ಭರತ್ರಾಜ್, ನವೀನ್ ಕುಮಾರ್, ಹರಿಪ್ರಸಾದ್ ಎನ್., ಪ್ರಶಾಂತ್ ಮಂಚಿ, ಸುಂದರ ಗೌಡ ಕಡ್ಯ, ಮಿಥುನ್ ಕೆ., ಗಣೇಶ್ ಶೇಖಮಲೆ, ಜಯರಾಮ ರೈ, ಧೀರಜ್ ಕೆಮ್ಮಿಂಜೆ, ಆನಂದ ನಾಕ್, ಅವಿನಾಶ್, ಕಿರಣ್ ಪ್ರಕಾಶ್ ರೈ ಕಾವು, ಮೋಹನ್ ರಾವ್, ರಾಜೇಶ್ ಆರ್, ರವಿಪ್ರಕಾಶ್, ಪ್ರಕಾಶ್ ಕುಮಾರ್ ಶೆಟ್ಟಿ, ಜಯಾನಂದರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆದರ್ಶ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಕ್ಯಾಂಪ್ಕೋ ಚಾಕೋಲೇಟ್ ನೀಡಲಾಯಿತು.