ಸೆ. 10 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿ ಮಹಾಸಭೆ

0

ಸಂಸ್ಥೆಯ ಲಾಂಛನ ಅನಾವರಣ – ಕು.ಸಾಹಿತ್ಯರಿಗೆ ಯುವ ಪುರಸ್ಕಾರ

ಸುಳ್ಯ ಯುವಜನ ಸಂಯುಕ್ತ ಮಂಡಳಿಯ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.1 ೦ರಂದು ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಲಿದೆ.
ಈ ಬಾರೀ ಸಂಸ್ಥೆಗೆ ಲಾಂಛನವನ್ನು ಹೊಸದಾಗಿ ಮಾಡಲಾಗಿದ್ದು ಅದರ ಅನಾವರಣ ಹಾಗೂ ಸಭಾಭವನದ ಪರದೆ, ಪೋಡಿಯಂ ಹಾಗೂ ನಾಮಫಲಕಗಳ ಅನಾವರಣವು ಇದೇ ಸಂದರ್ಭದಲ್ಲಿ ನಡೆಯುವುದು.
ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಲಿದ್ದು, ಸಮಾರಂಭದಲ್ಲಿ ವರದಿ, ಲೆಕ್ಕಪತ್ರ ಮಂಡನೆ ನಡೆಯುವುದು. ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಸಂದರ್ಭ ದೆಹಲಿ ಪೆರೇಡ್‌ನಲ್ಲಿ ಭಾಗವಹಿಸಿದ ಕು. ಸಾಹಿತ್ಯ ಕೇರ್ಪಳರನ್ನು ಯುವ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಗುವುದು. ತಾಲೂಕಿನ ನೋಂದಾಯಿತ ಯುವಕ ಮತ್ತು ಯುವತಿ ಮಂಡಲಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸುವಂತೆ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here