ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಸ್ವರ್ಣ ಮಹೋತ್ಸವ-ಸದಸ್ಯರಿಗೆ ಸ್ಪರ್ಧೆ

0

ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಸ್ವರ್ಣಮಹೋತ್ಸವದ ಅಂಗವಾಗಿ ಸಂಘದ ಸದಸ್ಯರಿಗೆ ಎರಡು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ವರಚಿತ ಕವನ ಮತ್ತು `ನಿವೃತ್ತಿ ಪ್ರವೃತಿ’ ಪ್ರಬಂಧ ಸ್ಪರ್ಧೆ.ಎ೪ ಹಾಳೆಯಲ್ಲಿ 2 ಪುಟ ಮೀರದಂತೆ ಬರೆಯಬೇಕು. ಸ್ಫರ್ಧೆಗಳು ತಮ್ಮ ಲೇಖನವನ್ನು ಸಂಘದ ಕಾರ್ಯಾಲಯದಲ್ಲಿ  ಫ.28ರ ಒಳಗಾಗಿ ನೀಡಬೇಕು. ಸಂಘದ ಸದಸ್ಯರಾಗದವರು ಸದಸ್ಯರಾಗಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ.ಆಯ್ಕೆಗೊಂಡ ಕವನ ಮತ್ತು ಪ್ರಬಂಧವನ್ನು ಸ್ವರ್ಣಮಹೋತ್ಸವದ ಸ್ಮರಣ ಸಂಚಿಕೆಯಲ್ಲಿ ಮುದ್ರಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಮೊ: 9449030872 ಅನ್ನು ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಮತ್ತು ಸ್ಪರ್ಧಾ ಸಂಚಾಲಕಿ ಪ್ರೊ|ವತ್ಸಲಾ ರಾಜ್ಞಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here