ಪುತ್ತೂರು: ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಪರಮಪೂಜ್ಯ ಅನಂತಶ್ರೀವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಸಂಪ್ಯ ಕಂಬಳತ್ತಡ್ಡದಲ್ಲಿ ಆರ್ಯಾಪು-ಕಂಬಳತ್ತಡ್ಡ ಮತ್ತು ರವಿಚಂದ್ರ ಆಚಾರ್ಯರವರು ನೂತನವಾಗಿ ನಿರ್ಮಿಸಿದ `ಆಶ್ರಯ ನಿಲಯ’ ಗೃಹಪ್ರವೇಶ ಹಾಗೂ ಪುತ್ರ ಚಿ|ಅಕ್ಷಯ ಕುಮಾರನ ಬ್ರಹ್ಮೋಪದೇಶ ಕಾರ್ಯಕ್ರಮವು ಜೂ.1 ರಂದು ಜರಗಿತು.
ಈ ಸಂದರ್ಭದಲ್ಲಿ ಚಿ|ಅಕ್ಷಯ ಕುಮಾರ್ ಇವರ ತಂದೆ-ತಾಯಿ ಆರ್ಯಾಪು-ಕಂಬಳತ್ತಡ್ಡ ಮತ್ತು ಶ್ರೀ ರವಿಚಂದ್ರ ಆಚಾರ್ಯ, ಅಜ್ಜ-ಅಜ್ಜಿ ಲೀಲಾವತಿ ಮತ್ತು ಸುಬ್ರಾಯ ಆಚಾರ್ಯ ಸಹಿತ ಕುಟುಂಬಿಕರು, ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.