ವಿಟ್ಲ: ವಿಠ್ಠಲ್ ಜೇಸಿ ಶಾಲಾ ಪ್ಲೇ ಹೋಂ ನೂತನ ಕಟ್ಟಡದ ‘ಜೇಸಿ ಕುಟೀರ’ ದಲ್ಲಿ ಧಾರ್ಮಿಕ ವಿಧಿವಿಧಾನಗಳು ಜೂ.5ರಂದು ಬೆಳಗ್ಗೆ ನಡೆಯಿತು.
ವಿಠಲ ಪದವಿಪೂರ್ವ ಕಾಲೇಜಿನ ನಿವೃತ ಪ್ರಾಂಶುಪಾಲ, ಪುರೋಹಿತರಾದ ರಾಧಾಕೃಷ್ಣ ಭಟ್ ಬಟ್ರುಪ್ಪಾಡಿ ರವರ ಪೌರೋಹಿತ್ಯದಲ್ಲಿ ಗಣಹೋಮ, ವಾಸ್ತು ಮತ್ತು ಲಕ್ಷ್ಮಿ ಪೂಜೆ ಸಹಿತ ಹಲವಾರು ವೈದ್ದಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ದಿವ್ಯ ನಿಧಿ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಜೂ.೬ರಂಂದು ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅಧ್ಯಕ್ಷರಾದ ಎಲ್ ಎನ್ ಕೂಡೂರು ಅವರು ಪತ್ನಿ ಸಿರಿ ಎಲ್. ಎನ್. ಕೂಡೂರು, ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು, ಪ್ರಾಂಶುಪಾಲರಾದ ಜಯರಾಮ ರೈ, ಉಪ ಪ್ರಾಂಶುಪಾಲೆಯರಾದ ಜ್ಯೋತಿ, ಹೇಮಲತ ಸಹಿತಿ ಹಲವುಗಣ್ಯರು ಉಪಸ್ಥಿತರಿದ್ದರು.