ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾಮಗಾರಿ ಮಜ್ದೂರು ಸಂಘ ಇದರ ಭಾರತೀಯ ಮಜ್ದೂರು ಸಂಘ ಕಡಬ ತಾಲೂಕು ಇದರ ಸುಬ್ರಹ್ಮಣ್ಯ ವಲಯ ಸಮಿತಿ ರಚನೆ ಅ.17 ರಂದು ಸುಬ್ರಹ್ಮಣ್ಯದಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷರಾಗಿ ಗಿರೀಶ್ ಆಚಾರ್ಯ ಪೈಲಾಜೆ, ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಮಾನಾಡು ಅವರನ್ನು ಆಯ್ಕೆ ಮಾಡಲಾಗಿದೆ. ಕೋಶಾಧಿಕಾರಿಯಾಗಿ ಗಿರೀಶ್ ಆಚಾರ್ಯ ಕುಲ್ಕುಂದ, ಉಪಾಧ್ಯಕ್ಷರಾಗಿ ಬೆಳಿಯಪ್ಪ ಐನೆಕಿದು, ಸಂಘಟನಾ ಕಾರ್ಯದರ್ಶಿಯಾಗಿ ಪುಟ್ಟಣ್ಣ ವಾಲಗದಕೇರಿ ಆಯ್ಕೆಯಾದರು. ಸದಸ್ಯರುಗಳಾಗಿ ವಿನೋದ್ ಅಗಳಿಕಜೆ, ಶ್ರೀಕುಮಾರ್, ಕಿರಣ್ ಪೈಲಾಜೆ, ನಾರಾಯಣ ಮೇಸ್ತ್ರಿ, ಸತೀಶ ಸಂಕೇಶ, ಪರಮೇಶ್ವರ ಐನೆಕಿದು, ಶೈಲೇಶ್ ಆಚಾರ್ಯ, ರಾಮಚಂದ್ರ ದೇವರಗದ್ದೆ, ಸಂದೇಶ ಪಿ ಇರಲಿದ್ದಾರೆ.